ನಾನು ೬ನೇ ತರಗತಿಯಲ್ಲಿ ಓದುತ್ತಿರುವಾಗ ನಡೆದ ಘಟನೆ, ಅಂದು ರವಿವಾರ ಆದ್ದರಿಂದ ಅಪ್ಪ ಚಿಕ್ಕಪ್ಪ ಸೋಮವಾರ ನಡೆಯುವ ಸಿಂದನೂರಿನ ಕುರಿಗಳ ಸಂತೆಗೆ ರವಿವಾರವೇ ಕುರಿಗಳನ್ನು ಮಾರಲು ತಗೊಂಡು ಹೋಗುವರಿದ್ದರು, ಆದ್ದರಿಂದ ಹೊಲದಲ್ಲಿ ಜೋಳದ ಬೆಳೆಗಳನ್ನು ಕಾಯಲು ನನ್ನನ್ನು ನೇಮಿಸಿದ್ರು. ನಾನು ನನ್ನ ಸ್ನೇಹಿತ ವರ್ಮ ಮತ್ತು ನಮ್ಮತ್ತೆಯ ಮಗಳು ದುರ್ಗಾ (ಇವಳು ನನ್ನ ಕ್ಲಾಸ್ ಮೆಟ್) ಹೋಗಿದ್ದೇವು, ಆ ಜೋಳದ ಬದುವಿನ ಮೇಲೆ ಒಂದು ಪೊದೆ ಇದೆ ಅಲ್ಲಿ ಹೆಜ್ಜೆನು ಇರುವುದು ನನಗೆ ಅಪ್ಪ ಮೊದಲೇ ಹೇಳಿದ್ದರು. ಅದನ್ನು ನೋಡಲು ವರ್ಮನೊಂದಿಗೆ ನಾನು ಹೊದೆನು, ಕಲ್ಲೆಸೆಯಬೆಡವೆಂದರು ವರ್ಮ ಕಲ್ಲೆಸೆದು ಒಡಿದನು. ನಾನು ಅಲ್ಲಿಯೆ ನಿಂತುಬಿಟ್ಟೆ ಹುಳುಗಳು ನನಗೆ ಕಚ್ಚಿದವು. ಎಸ್ಟು ಒಡಿದ್ರು ಬಿಡಲಿಲ್ಲ. ನಮ್ಮ ಹೊಲ ಮನೆಯಿಂದ ೨ ಕಿ.ಮಿ. ದೂರ. ಹುಳಗಳಿಂದ ಕಚ್ಚಿಸಿಕೊಂಡ ನಾನು ಸುಸ್ತಾಗಿ ಘ್ನಾನ ತಪ್ಪಿ ಬಿದ್ಬಿಟ್ಟೆ ನಾನು ಎಚ್ಚರವಾದಾಗ ಡಾ|| ಹನುಮಂತಪ್ಪ ಅವ್ರ ಆಸ್ಪತ್ರೆಯಲ್ಲಿದ್ದೆ. ಮೈ ಹೊಳಿಸಲು ಬರಲಿಲ್ಲ ಮೈಎಲ್ಲ ಬಾವು ಬಂದಿತ್ತು ಆಗ ನನಗೆ ಅರ್ಥವಾಯಿತು ನಾನು ಉಳಿದಿರುವುದಕ್ಕೆ ದುರ್ಗಾ ಕಾರಣ ನಾನು ಜ್ಗಾನ ತಪ್ಪಿದಾಗ ಅವಳು ಸಮಯಕ್ಕೆ ಸರಿಯಾಗಿ ಮನೆಗೆ ಹೊಗದಿದ್ದರೆ ಅಪ್ಪ ಸಂತೆಗೆ ಹೋಗಲು ಸಜ್ಜಾಗಿದ್ದರು ಇವಳು ಹೊಗಿ ನಡೆದನ್ನು ಹೇಳಿದಾಗ ಅವ್ರು ಅವತ್ತು ಸಂತೆಯನ್ನು ಬಿಟ್ಟು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ರು, ಆಷ್ಟರಲ್ಲಾಗಲೆ ನನ್ನ ದೇಹ ಜೆನುಳುಗಳ ಕಡಿತದಿಂದ ನರಗಳೆಲ್ಲ ನಿಶ್ಚಲವಾಗಿದ್ದವು. ಸ್ವಲ್ಪ ಲೆಟಾಗಿದ್ದರೆ ನಾನು ಸತ್ತಿರುತ್ತಿದ್ದೆ ಎಂದು ಡಾಕ್ಟರ ಹೇಳಿದರು.
ವರ್ಮ ನಾನು ಆರಾಮ ಆದ್ರು ಅವ್ನು ದಿನ ನಮ್ಮನೆಗೆ ಹೊಗುತ್ತಿದ್ದನು.
ಈ ಸ್ನೇಹಿತರ ಉಪಕಾರವನ್ನು ಮರೆಯಲು ಸಾದ್ಯವೇ? ನೋ